Slide
Slide
Slide
previous arrow
next arrow

ಅ.25ಕ್ಕೆ ಗೋಳಗೋಡ ದೇವಾಲಯದಲ್ಲಿ ತಾಳಮದ್ದಲೆ

300x250 AD

ಸಿದ್ದಾಪುರ: ತಾಲೂಕಿನ ಗೋಳಗೋಡದ ಸಿದ್ಧಿವಿನಾಯಕ ದೇವಾಲಯದ (ಹೆಗ್ಗರಣಿ) ಪ್ರಾಂಗಣದಲ್ಲಿ ಹವ್ಯಾಸಿ ಯಕ್ಷಕಲಾ ಬಳಗ ಹಾಗೂ ದೇವಾಲಯದ ಆಡಳಿತ ಮಂಡಳಿಯ ಆಶ್ರಯದಲ್ಲಿ ಅ.25ರಂದು ಮಧ್ಯಾಹ್ನ 4 ಘಂಟೆಗೆ “ಶಬರಾರ್ಜುನ” ಮತ್ತು “ಊರ್ವಶಿ ಶಾಪ” ತಾಳಮದ್ದಲೆ ನಡೆಯಲಿದೆ.

ಹಿಮ್ಮೇಳದಲ್ಲಿ ಭಾಗವಗತರಾಗಿ ಪ್ರಸನ್ನ ಭಟ್ಟ ಬಾಳ್ಕಲ, ಎಂ.ಪಿ.ಹೆಗಡೆ ಉಲ್ಲಾಳಗದ್ದೆ, ಮೃದಂಗದಲ್ಲಿ ಎನ್.ಜಿ.ಹೆಗಡೆ ಯಲ್ಲಾಪುರ ಕಾರ್ಯನಿರ್ವಹಿಸಲಿದ್ದಾರೆ. ಅರ್ಥಧಾರಿಗಳಾಗಿ ವಿಶ್ವೇಶ್ವರ ಭಟ್ ಸುಣ್ಣಂಬಳ, ಗಣಪತಿ ಭಟ್ಟ ಸಂಕದಗುಂಡಿ, ವಾಸುದೇವ ರಂಗ ಭಟ್ಟ ಮಧೂರು, ಶಂಭು ಶರ್ಮಾ ವಿಟ್ಲ, ಸೀತಾರಾಮ ಚಂದು ಶಿರಸಿ ಪಾಲ್ಗೊಳ್ಳದ್ದಾರೆ ಎಂದು ಸಂಘಟನೆಯ ಪರವಾಗಿ ನಾಗಪತಿ ಹೆಗಡೆ ಕಡ್ನಮನೆ (Tel:+918762149851) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top